You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಭೂಮ್ಯಾಕಾಶ ಕವನ ಸಂಕಲನ ಒಟ್ಟು ೩೫ ಕವನಗಳ ಗುಚ್ಛ. ಇದರ ಪ್ರಮುಖ ಉದ್ದೇಶ ಮರೆಯಾಗುತ್ತಿರುವ ಕನ್ನಡ ಪದಗಳು ಸಾಮಾಜಿಕ ಮುಖ್ಯವಾಹಿನಿಗೆ ಮರಳಿ ಮನೆಮಾತಾಗಬೇಕು ಎಂಬುದಾಗಿದೆ.
ಕನ್ನಡ ಪ್ರೇಮದಿಂದ ಹೊರಡುವ ಓದಿನ ಹಾಯಿ, ಪ್ರೀತಿಯ ನದಿ ದಾಟಿ, ಜೀವನದ ಕಷ್ಟ ಕಾರ್ಪಣ್ಯಗಳನ್ನ ಅನುಭವಿಸಿ ಕೊನೆಗೆ ಪರಿಸರದ ಜಾಡು ಹಿಡಿದು ಕುಕ್ಕರಹಳ್ಳಿಯ ದಂಡೆ ತಲುಪುತ್ತದೆ. ಈ ಪುಸ್ತಕದ ಬಹುತೇಕ ಕವನಗಳು ನಾಲ್ಕು ಪಂಕ್ತಿ ಮತ್ತು ಪ್ರತಿ ಪಂಕ್ತಿಗೂ ನಾಲ್ಕು ಸಾಲುಗಳ ಶೈಲಿಯನ್ನು ಹೊಂದಿದ್ದರೂ ಸಹ ಕೆಲವು ಕವನಗಳ ವಿಶಿಷ್ಟ ರಚನೆ ಕಣ್ಸೆಳೆಯುತ್ತದೆ. ಉದಾಹರಣೆಗೆ ‘ಕನ್ನಡ ಕಾಗುಣಿತ’ ಕವನದಲ್ಲಿ ಕ ಅಕ್ಷರದ ಕಾಗುಣಿತವನ್ನು ಪ್ರತಿ ಸಾಲಿನ ಪ್ರಥಮ ಅಕ್ಷರವನ್ನಾಗಿ ಬಳಸಿ ರಚಿಸಿರುವುದು ವಿಶೇಷ.
ಈ ಪುಸ್ತಕದ ಸಾಲುಗಳಲ್ಲಿ ಪ್ರೀತಿಯು ಇದೆ, ಬದುಕುವ ಹಂಬಲವೂ ಇದೆ, ಬದುಕು ಏಕೆ ಎಂಬ ಜಿಜ್ಞಾಸೆಯು ಇದೆ.
ಇದು ಕೇವಲ ಕವನಗಳ ಪುಸ್ತಕವಲ್ಲ; ಇದು ಕನ್ನಡದ, ಜೀವನದ ಮತ್ತು ಭಾಷೆಯ ಸಂಭ್ರಮ.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ನವೀನ್ ವೀರಭದ್ರ
ನವೀನ್ ವೀರಭದ್ರರವರು ಮೂಲತಃ ಕೊಡಗಿನ ಸೋಮವಾರಪೇಟೆಯ ಬಳಗುಂದ ಗ್ರಾಮದ ನಿವಾಸಿ. ತಮ್ಮ ಶೈಕ್ಷಣಿಕ ಜೀವನವನ್ನು ಇಲ್ಲಿಯೇ ಮುಗಿಸಿ, ಕೋಟ್ಯಂತರ ಯುವಕರಂತೆ ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಬಂದು, ಇಲ್ಲಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ “ಅಟೋಮೇಷನ್ ಡಿಜಿಟಲ್ ಕನ್ಸಲ್ಟೆಂಟ್“ ಆಗಿ ಕಳೆದ ೧೧ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರವೇ ಇವರ ದೈನಂದಿನ ಜೀವನಕ್ರಮವಾದರೂ ಸಹ ಇವರ ಮನಸನ್ನು ಆವರಿಸಿರುವುದು ಕನ್ನಡ ಮತ್ತು ಕನ್ನಡ ಸಾಹಿತ್ಯದ ಮೇಲಿನ ಪ್ರೇಮ.
ಇವರು ಕನ್ನಡ ಸಾಹಿತ್ಯ ಕಾವ್ಯಪ್ರಪಂಚದಲ್ಲಿ ತಮ್ಮದೇ ಆದ ವಿಶಿಷ್ಟ ಹಾದಿಯನ್ನು ರೂಪಿಸುತ್ತಿರುವ ಕವಿ. ಇವರ ಸಾಹಿತ್ಯ ಮರೆಯಾಗುತ್ತಿರುವ ಕನ್ನಡ ಪರಂಪರೆಯ ಪದಗಳನ್ನು ಮತ್ತೆ ನೆನಪಿಸುತ್ತದೆ, ಜೀವನದ ತಾತ್ವಿಕ ಅಂಶಗಳ ಶಾಶ್ವತತೆಯ ಸತ್ಯವನ್ನು ಎತ್ತಿ ಹಿಡಿಯುತ್ತದೆ.
“ಭಾಷೆ ಬೆಳೆಯಲಿ ಕಾವ್ಯ ಹರಡಲಿ!” ಎಂಬ ನೆಲೆಗಟ್ಟಿನಲ್ಲಿ ಇವರ ಸಾಹಿತ್ಯಯಾನ ಮುಂದುವರೆಯಲಿ.
The items in your Cart will be deleted, click ok to proceed.